ಆಸೆ, ಕನಸು, ಪ್ರೀತಿ, ಸ್ನೇಹ, ಸೋಲು, ಸವಾಲು, ಎಲ್ಲವೂ ಜೀವನದ ಗಿಡದಲ್ಲಿ ಅವಿಭಾಜ್ಯ ಅಂಗಗಳು
ಆಸೆ ಬೇರು,,
ಕನಸು ಕಾಂಡ,
ಸೋಲು ಒಣಗಿದ ಎಲೆ,
ಸವಾಲು ಬಿಸಿಲ ಬೇಗೆ, ನೆರಳು ಮಳೆಯ ಪರೀಕ್ಷೆ,,
ಸ್ನೇಹ, ಪ್ರೀತಿ ಹೂವು ,ಹಣ್ಣು, ಎಲೆಗಳ ಹಾಗೆ
ಎಲ್ಲವೂ ಬೇಕು.....
ಒಮ್ಮೊಮ್ಮೆ ಕೆಲವು ಬೇಡ ಎನಿಸುತ್ತದೆ,,, ಸೋಲೆಂಬ ಒಣ ಎಲೆ ಯಾರಿಗೆ ಬೇಕು ಹೇಳಿ ??...
ಬೇಡವಾದರೂ ಬೇಕು ಯಾಕೆ ಗೊತ್ತಾ ?!..
ಸೋಲೆಂಬ ಒಣ ಎಲೆ ಉದುರಿದರೆ ತಾನೇ ಗೆಲುವು ಅನ್ನೋ ಚಿಗುರೆಲೆ ಮರುಜೀವ ಪಡೆಯೋಕೆ ಸಾದ್ಯ ..
ವಸಂತ ಮಾಸ ಬರಲು ಸಾದ್ಯ..?
ಸವಾಲು, ಸೋಲು ಸ್ನೇಹಿತರಿದ್ದಂತೆ ಜೊತೆಗೆ ಬಂದು ಚಿತೆಯೇರುವಷ್ಟು ಸಮಸ್ಯೆ ತಂದೊಡ್ಡುತ್ತವೆ...
ಗಿಡವೊಂದು ಬೆಳೆಯಬೇಕು ಅಂದರೆ ವಾತಾವರಣದಲ್ಲಿ ಏರುಪೇರು ಸರ್ವೆ ಸಾಮಾನ್ಯ, ಎಲ್ಲದ್ದಕ್ಕೂ ಹೊಂದಿಕೊಂಡು
ಬೆಳೆಯಬೇಕು ಅದು ಅನಿವಾರ್ಯ ಕೂಡ, ಸವಾಲು ಕೂಡ,.. ಯಾವುದೇ ಜೀವಕ್ಕು ಜೀವನ ನೀಡುವ ಮೊದಲು
ದೇವರು ಸವಾಲು ಎದುರಿಸುವ ಶಕ್ತಿ ತುಂಬಿಸಿಯೇ ಕಳುಹಿಸಿರುತ್ತಾನೆ .. ಅದನ್ನು ನೆನೆದರೆ ಸಾಕು..
ಕಾರ್ಯಸ್ಥಿತಿಗೆ ತಂದು ಬೆಳೆಯಬಹುದು ಮುಂದೆ ...
ಇನ್ನು ಪ್ರೀತಿ, ಸ್ನೇಹ, ಆಸೆ, ಕನಸು, ಸಂತೋಷ , ನೆಮ್ಮದಿ ಬೇಡ ಅನ್ನೋ ಪ್ರಭೇದವೇ ಇಲ್ಲ..
ಎಲ್ಲವನ್ನೂ ಗಳಿಸುವುದು ಸೋಲು ಮತ್ತು ಸವಾಲನ್ನು ಗೆದ್ದಾಗ ಮಾತ್ರ ಇಲ್ಲವಾದರೆ ಎಲ್ಲವೂ ಶೂನ್ಯ ಜಗದಲ್ಲಿ, ಜೀವನದಲ್ಲಿ
ಪ್ರತಿ ಹಂತವೂ ವಿಸ್ಮಯ ಬೆಳವಣಿಗೆಯಲ್ಲಿ ..
ತುಳಿದುಹಾಕುವ ಹಂತದಿಂದ ಕಡಿದುಹಾಕುವ ಕೊನೆಯೆಂಬ ಪೂರ್ಣವಿರಾಮದವರೆಗೂ.
ಎಲ್ಲವನ್ನೂ ದಾಟಬೇಕು, ನಮ್ಮದೇ ಆದ ಧಾಟಿಯೊಡನೆ ನಂಬಿಕೆಯ ಚಾಟಿಯೊಡನೆ...
ಬಂಧ, ಬಂಧನ ಇರಬೇಕು ವಾತಾವರಣದ ಆಗುಹೋಗುಗಳ ಜೊತೆಗೂ
ಕೊನೆಗೆ ಪ್ರತಿಫಲ ಕಟ್ಟಿಟ್ಟ ತೃಪ್ತಿಯ ಬುತ್ತಿ.
ಆಸೆಯ ಬೇರು ಆಳಕ್ಕೆ ಅನುಭವದ ಜೊತೆ ಇಳಿದಷ್ಟು ಕನಸಿನ ಕಾಂಡ ಬೆಳೆಯುತ್ತಾ ಹೋಗುತ್ತದೆ...
ನಂತರದಲ್ಲಿ ಸ್ನೇಹ ಪ್ರೀತಿ ಚಿಗುರೊಡೆಯುತ್ತವೆ...
ಪ್ರೀತಿ ಸ್ನೇಹ ತಯಾರಿಸುವ ಜೀವಾಮೃತ ತಿಂದೇ ಜೀವನ ವೃಕ್ಷ ಬೆಳೆವುದು..
ಆಸೆ ನೀಡುವ ಉತ್ಸಾಹವೆಂಬ ಲವಣದಿಂದ ಎಲೆ ಹೂವು ಬೆಳೆವುದು...
ಕನಸೆಂಬುದು ಪ್ರೀತಿ, ಸ್ನೇಹ, ಆಸೆಗಳ ರಾಯಭಾರಿ ಯಾವುದನ್ನು ಬಿಟ್ಟು ಜೀವನ ವೃಕ್ಷ ಬೆಳೆಯದು....
-ಶಿಲ್ಪ